ಸ್ಯಾಂಡಲ್‌ವುಡ್‌ ಲೋಕದಲ್ಲಿ ಇದೀಗ ಕುರುಕ್ಷೇತ್ರ ಸಿನಿಮಾದ್ದೆ ಹವಾ. ಇನ್ನೇನು ಆಗಸ್ಟ್‌ 9ರಂದು ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆದರೆ ಕಡಿಮೆ ಥೀಯಯರ್ ಸಿಕ್ಕಿರೋದಕ್ಕೆ ಕೊಂಚ ಮಟ್ಟದಲ್ಲಿ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದರೆ ಇದೀಗ ಚಿತ್ರತಂಡ ಪ್ರಮೋಷನ್ ನಲ್ಲಿ ಚಿತ್ರತಂಡ ಬ್ಯುಸಿ ಆಗಿದೆ. ಐದು ಭಾಷೆಗಳಲ್ಲಿ ಕುರುಕ್ಷೇತ್ರ ಸಿನಿಮಾ ಮೂಡಿ ಬರುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿಯೂ ಈ ಸಿನಿಮಾ ಬಿಡುಗಡೆ ಆಗುತ್ತಿರೋದು ಮತ್ತೊಂದು ಹೆಮ್ಮೆಯ ವಿಷಯವಾಗಿದೆ. 


ಆದರೆ ಸಿನಿಮಾದಿಂದ ನಿಖಿಲ್ ಕುಮಾರಸ್ವಾಮಿ ಅವರು ದೂರ ಉಳಿಯುತ್ತಿದ್ದಾರೆಯೇ ಎನ್ನುವ ಅನುಮಾನ ಕಾಡುತ್ತಿದೆ. ಇದಕ್ಕೆ ಒಂದಲ್ಲ ಎರಡಲ್ಲ, ಬಹಳಷ್ಟು ಕಾರಣಗಳು ಇವೆ. ಹೌದು ನಿನ್ನೆ ನಡೆದ ಪ್ರೆಸ್‌ ಮೀಟ್‌ನಲ್ಲಿಯೂ  ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯೂ ಪಾತ್ರ  ಮಾಡಿದ ನಿಖಿಲ್ ಕುಮಾರಸ್ವಾಮಿ ಅವರು ಕಾಣಿಸಿಕೊಂಡಿಲ್ಲ. ಹೀಗಾಗಿ ನಿಖಿಲ್ ಅವರ ಅದ್ಯಾಕೆ ಈ ಪ್ರೆಸ್‌ಮೀಟ್‌ನಲ್ಲಿ ಭಾಗಿಯಾಗಿಲ್ಲ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. 

ಹೌದು, ಕುರುಕ್ಷೇತ್ರ ರಿಲೀಸ್ ಪ್ರೆಸ್‌ಮೀಟ್‌ ಮಾತ್ರವಲ್ಲದೇ, ಕುರುಕ್ಷೇತ್ರದ ಯಾವುದೇ ಕಾರ್ಯಕ್ರಮದಲ್ಲಿಯೂ ನಿಖಿಲ್ ಅವರು ಭಾಗಿಯಾಗಿಲ್ಲ. ಹೌದು, ಆಡಿಯೋ ರಿಲೀಸ್, ತೆಲುಗುಉ ಆಡಿಯೋ, ಮತ್ತು ಈ ಹಿಂದೆ ನಡೆದಿರೋ ಯಾವುದೇ ಕುರುಕ್ಷೇತ್ರ ಸಿನಿಮಾದ ಪ್ರೆಸ್‌ಮೀಟ್‌ನಲ್ಲಿ ನಿಖಿಲ್ ಅವರು ಕಾಣಿಸಿಕೊಂಡಿಲ್ಲ. ಕುರುಕ್ಷೇತ್ರ ಸಿನಿಮಾ ಇದು ದರ್ಶನ್ ಅವರ 50ನೇ ಸಿನೆಮಾ ಅನ್ನೋದು ಎಲ್ಲರಿಗೂ ಗೊತ್ತಿರೋದೆ. 

ದರ್ಶನ್ ಹಾಗೂ ಯಶ್ ಅವರು ಮಂಡ್ಯ ಚುನಾವಣೆಯಲ್ಲಿ ನಿಖಿಲ್ ಅವರ ವಿರುದ್ಧ ಪ್ರಚಾರ ಮಾಡಿದ್ದರು. ಹೀಗಾಗಿ ನಿಖಿಲ್ ಸೋತು, ಸುಮಲತಾ ಅಂಬರೀಶ್ ಅವರು ಗೆದ್ದು ಸಂಸದರಾಗಿ ಆಯ್ಕೆ ಆಗಿದ್ದರು. ಹೀಗಾಗಿ ಈ ಮುನಿಸು ಇನ್ನೂ ನಿಖಿಲ್ ಕುಮಾರಸ್ವಾಮಿ ಅವರಲ್ಲಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸಿನಿಮಾದ ಯಾವುದೇ ಕಾರ್ಯಕ್ರಮದಲ್ಲಿಯೂ ನಿಖಿಲ್ ಕುಮಾರಸ್ವಾಮಿ ಅವರು ಭಾಗಿಯಾಗುತ್ತಿಲ್ಲ ಎನ್ನಲಾಗುತ್ತಿದೆ. 

ನಿಖಿಲ್ ಅವರು ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಇನ್ನೇನು ಆಗಸ್ಟ್ 9 ರಂದು ತೆರೆ ಮೇಲೆ ಬರಲಿದೆ. ಪ್ರೇಕ್ಷಕರು ಹೇಗೆ ಈ ಬಿಗ್ ಬಜೆಟ್ ಸಿನಿಮಾವನ್ನು ಸ್ವೀಕರಿಸುತ್ತಾರೋ ಅನ್ನೋದನ್ನು ಕಾದು ನೋಡಬೇಕಿದೆ. 



Find out more: