ಚೇತನ್ ಸಿನಿಮಾ ಹವಾ ಹೇಗಿರುತ್ತೇ ಅಂತ ಸ್ಯಾಂಡಲ್ ವುಡ್ ಸಿನಿ  ಪ್ರಿಯರಿಗೆ ತಿಳಿದೇ ಇದೆ. ಹೀಗೆಂದು ನಿರ್ದೇಶಕ ತರುಣ್ ಸುಧೀರ್ ವಿವರಿಸಿದರು. ಪ್ರಸ್ತುತ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ಭರಾಟೆಯ ಆಡಿಯೋವನ್ನು ನಿರ್ದೇಶಕರಾದ ತರುಣ್ ಸುಧೀರ್, ನರ್ತನ್ ಹಾಗೂ ಮಹೇಶ್ ಕುಮಾರ್ ಬಿಡುಗಡೆ ಮಾಡಿದರು. 


ಈ ಸಮಯದಲ್ಲಿ ಚೇತನ್ ಕುಮಾರ್ ಸಿನಿಮಾದ ಬಗ್ಗೆ ತರುಣ್ ಮೆಚ್ಚುಗೆ ಮಾತನ್ನು ಆಡಿದರು. 'ಸೈರಾ' ಬಿಡುಗಡೆಯಿಂದ ಕನ್ನಡದ ಮೂರು ಚಿತ್ರಗಳಿಗೆ ಎದುರಾದ ಸಂಕಷ್ಟ ''ಚೇತನ್ ಸಿನಿಮಾ ಒಂದ್ ಏನರ್ಜಿ. ಅವನ ಸಿನಿಮಾದಲ್ಲಿ ಯಾವುದಾದರೂ ಒಂದು ಹಾಡನ್ನು ದೊಡ್ಡ ಅಬ್ಬರ ಮಾಡಿರುತ್ತಾನೆ. ನಾವು ಮುಂದೆ ಹಾಡು ಮಾಡುವಾಗ, ಭರ್ಜರಿ ನೋಡಿದ್ರಾ, ಬಹದ್ದೂರ್ ಸಾಂಗ್ ನೋಡಿದ್ರಾ. ಸ್ವಲ್ಪ ಆ ರೀತಿ ಬೇಕು ಅಂತ ಕೇಳುತ್ತಾರೆ. ಚೇತನ್ ಸಿನಿಮಾ ಬರ್ತಿದೆ ಅಂದರೆ ನಾವು ಸ್ವಲ್ಪ ಹುಷಾರ್ ಆಗ್ತಿವಿ.'' ಎಂದರು ತರುಣ್.


ಕನ್ನಡದ ''ಭರಾಟೆ ಸಿನಿಮಾ ಕೂಡ ನಮಗೆ ಎಚ್ಚರಿಸುವ ಹಾಗಿದೆ. ನಾನು ಇನ್ನಷ್ಟು ಶ್ರಮ ಹಾಕಿ, ಇನ್ನಷ್ಟು ತಿಳಿದುಕೊಂಡು ಮೇಕಿಂಗ್ ಮಾಡಬೇಕು ಅನಿಸುತ್ತದೆ. ಎಲ್ಲ ಟೆಕ್ನಿಷಿಯನ್ ಗಳು ಒಳ್ಳೆಯ ಕೆಲಸ ಮಾಡಿದ್ದಾರೆ.'' ಎಂದು ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳಿದರು. ಶ್ರೀಮುರಳಿ ಜೊತೆ ಬುಲ್ ಬುಲ್ ರಚಿತಾ 'ಭರಾಟೆ' ಡಾನ್ಸ್ 'ಭರಾಟೆ' ಸಿನಿಮಾದ ಮೂರು ಹಾಡುಗಳು ಸದ್ಯ ಬಿಡುಗಡೆಯಾಗಿದ್ದು, ಮೂರೂ ಹಾಡುಗಳು  ಸಖತ್ ಹಿಟ್ ಆಗಿವೆ. ಸಿನಿಮಾ ಅಕ್ಟೋಬರ್ 18 ರಂದು ತೆರೆಗೆ ಅಪ್ಪಳಿಸಲಿದೆ.  ಶ್ರೀಮುರಳಿ ಹಾಗೂ ಶ್ರೀಲೀಲಾ ಚಿತ್ರದಲ್ಲಿ ನಟಿಸಿದ್ದಾರೆ.


ಕನ್ನಡದಲ್ಲಿ ಅಕ್ಟೋಬರ್ 18 ರಂದು ತೆರೆ ಕಾಣಲಿರುವ ಶ್ರೀ ಮುರಳಿಯ ಈ ಚಿತ್ರವು ಈಗಾಗಲೇ ಆಡಿಯೋ ಹಿಟ್ ಆಗಿ ಭಾರೀ ಸದ್ದು ಮಾಡಿದೆ. ವಿಶೇಷತೆ ಏನಪ್ಪಾ ಅಂದರೆ ಈ ಚಿತ್ರವು ಶ್ರೀ ಮುರಳಿ ಗೆ ಮತ್ತೊಂದು ಮೈಲಿಗಲ್ಲು ಆಗಲಿದೆಯಂತೆ. ಚಿತ್ರದ ಡೈಲಾಗ್,  ಟೀಸರ್ ಈಗಾಗಲೇ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

Find out more: