ಅಂತೂ ಬಿಎಸ್ ಯಡಿಯೂರಪ್ಪ ಅವರು 4ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಈ ಹಿಂದೆ ಮೂರು ದಿನಗಳ ಕಾಲ ಅವರು ಸಿಎಂ ಆಗಿದ್ದರು. ಇದೀಗ ಮತ್ತೆ ಸಿಎಂ ಆದ ಬಿಎಸ್ವೈಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಭಿನಂದನೆ ಸಲ್ಲಿಸಿದ್ದಾರೆ. 


ಅಷ್ಟಕ್ಕೂ ಅಮಿತ್ ಶಾ ಹೇಳಿದ್ದಾದ್ರೂ ಏನು ಅನ್ನೋದು ಇಲ್ಲಿದೆ. ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು ಎಂದು ಹೇಳಿರೋ ಅಮಿತ್ ಶಾ, ಬಿಎಸ್ವೈ ನಾಯಕತ್ವದಲ್ಲಿ ಹಾಗೂ ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಬಿಜೆಪಿ ರಾಜ್ಯದಲ್ಲಿ ಸ್ಥಿರ, ರೈತ ಪರ, ಅಭಿವೃದ್ಧಿ ಆಧರಿತ ಆಡಳಿತವನ್ನು ನೀಡುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.


ಅಷ್ಟೇ ಅಲ್ಲದೇ ರಾಜ್ಯದ ಜನರ ನಿರೀಕ್ಷೆಗಳನ್ನು ಈಡೇರಿಸಲು ಬಿಜೆಪಿ ಬದ್ಧವಾಗಿದೆ ಎಂದು ನಾನು ಕರ್ನಾಟಕದ ಜನರಿಗೆ ಭರವಸೆ ನೀಡುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಟ್ವೀಟ್ ಮಾಡಿದ್ದಾರೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರಿಗೆ ಮತ್ತಷ್ಟು ಖುಷಿ ಉಂಟಾಗಿದೆ. ಮತ್ತೆ ಸಿಎಂ ಗಾದಿಗೇರಿರೋದು ಎಲ್ಲಿಲ್ಲದ ಖುಷಿ ತಂದಿದೆ.


Find out more: